ರಂಜಿತ್ ಬೇಕರಿ ಸ್ಥಳಾಂತರಗೊಂಡು ಶುಭಾರಂಭ

0

 

ಸುಳ್ಯದಲ್ಲಿ ಕಳೆದ 38 ವರ್ಷಗಳಿಂದ ವ್ಯವಹರಿಸುತ್ತಿರುವ ರವೀಂದ್ರ ಪೂಜಾರಿ ಪರಿವಾರಕಾನ ರವರ ಮಾಲಕತ್ವದ ರಂಜಿತ್ ಬೇಕರಿಯು ಗ್ರಾಹಕರ ಹೆಚ್ಚಿನ ಅನೂಕೂಲತೆಗೋಸ್ಕರ ಶಶಿ ಕಾಂಪ್ಲೆಕ್ಸ್ ನಿಂದ ಗಾಂಧಿನಗರದ ಆಲೆಟ್ಟಿ ಕ್ರಾಸ್ ಬಳಿಯಿರುವ ಸುಸಜ್ಜಿತ ಕಟ್ಟಡಕ್ಕೆ ಆ.31 ರಂದು ಸ್ಥಳಾಂತರ ಗೊಂಡು ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮೀ, ಎಸ್.ಐ. ದಿಲೀಪ್, ನ.ಪಂ.ಸದಸ್ಯ ರಿಯಾಝ್ ಕಟ್ಟೆಕ್ಕಾರ್, ಶರೀಫ್ ಕಂಠಿ, ಹರೀಶ್ ರೈ ಉಬರಡ್ಕ, ಶಿವಪ್ರಸಾದ್ ಪೂಜಾರಿ ಸುಳ್ಯ, ಜೆ.ಕೆ.ರೈ, ಸುಧಾಕರ ಕಲ್ಲಪಳ್ಳಿ, ಟಿ.ಎಂ.ಶಹೀದ್, ಸುಂದರ ಪಾಟಾಜೆ, ಹಸೈನಾರ್, ಶೇಖರ ಪೂಜಾರಿ,ಶಂಶುದ್ದೀನ್, ರಾಜೇಶ್ ನಾಯಕ್,ಮನೋಜ್ ಮಂಗಳೂರು, ಶರತ್ ಪದವಿನಂಗಡಿ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಎಲ್ಲರನ್ನೂ ರಂಜಿತ್ ಪೂಜಾರಿ ,ಶ್ರೀಮತಿ ರೇವತಿ ರವೀಂದ್ರ ಪೂಜಾರಿ, ಕು.ರಕ್ಷಿತಾ ಸಾಲ್ಯಾನ್ ರವರು ಸ್ವಾಗತಿಸಿದರು.