ಎ.ಆರ್. ಗೋಪಾಲ ಅಂಬಾಡಿಮೂಲೆ ನಿಧನ

0


ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಎ.ಆರ್. ಗೋಪಾಲ ಅವರು ಮೆದುಳಿನ ರಕ್ತಸ್ರಾವದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ.27ರಂದು ಸಂಜೆ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಅಸೌಖ್ಯದಿಂದ ಇದ್ದ ಗೋಪಾಲ ಅವರನ್ನು ಮಾ.25ರಂದು ಬೆಳಿಗ್ಗೆ ಸುಳ್ಯದ ಜ್ಯೋತಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮಾ.27ರಂದು ಸಂಜೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ಪತ್ನಿ ಶ್ರೀಮತಿ ನಾರಾಯಣಿ , ಪುತ್ರರಾದ ಅಮಿತ್, ಅಜಿತ್, ಅಕ್ಷಿತ್, ಸಹೋದರರಾದ ಎ.ಆರ್. ಭಾಸ್ಕರ ಅಡ್ಕಾರು, ಎ.ಆರ್. ಬಾಬು ಅಡ್ಕಾರು, ಎ.ಆರ್. ಗಂಗಾಧರ ಅಡ್ಕಾರು, ಎ.ಆರ್. ಪುಷ್ಪಾಕರ ಅಡ್ಕಾರು, ಸಹೋದರರಿ ಶ್ರೀಮತಿ ಜಾನಕಿ ಪಾಜಪಳ್ಳ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.