ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆ.ಆರ್.ಗಂಗಾಧರ್ ರಿಗೆ ಸಮ್ಮೇಳನದ ಆಮಂತ್ರಣ ನೀಡಿ ಗೌರವಾರ್ಪಣೆ

0


ಸಜ್ಜನ ಸಭಾ ಭವನ ಬೀಜದಕಟ್ಟೆ, ಗೂನಡ್ಕ ಇಲ್ಲಿ ನಡೆಯಲಿರುವ 26ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ .ಕೆ. ಆರ್.ಗಂಗಾಧರ ಅವರಿಗೆ ಅವರ ನಿವಾಸಕ್ಕೆ ತೆರಳಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸ್ವಾಗತ ಸಮಿತಿ ಗೂನಡ್ಕ ವತಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ನೀಡಿ,ಗೌರವಿಸಿ , ಆಹ್ವಾನಿಸಲಾಯಿತು.


ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಚಂದ್ರಶೇಖರ ಪೇರಾಲು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ರಾಮಚಂದ್ರ ಪಲ್ಲತ್ತಡ್ಕ,ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ,ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಪ್ರೊ. ಬಾಲಚಂದ್ರ ಗೌಡ, ಪ್ರೊ.ಸಂಜೀವ ಕುದ್ಪಾಜೆ, ಕೇಶವ ಸಿ.ಎ., ಶರೀಫ್ ಜಟ್ಟಿಪಳ್ಳ, ಯೋಗೀಶ್ ಹೊಸೋಳಿಕೆ, ಶ್ರೀಮತಿ. ಲತಾಶ್ರೀ ಸುಪ್ರೀತ್ ಮೋಂಟಡ್ಕ, ಗೋಪಿನಾಥ್ ಮೆತ್ತಡ್ಕ, ಶ್ರೀಮತಿ. ಶಶ್ಮಿ ಭಟ್ ಅಜ್ಜಾವರ, ಸ್ವಾಗತ ಸಮಿತಿ ಯ ಅಧ್ಯಕ್ಷ ರಾದ ಡಾ. ಉಮ್ಮರ್ ಬೀಜದಕಟ್ಟೆ, ಪ್ರಧಾನ ಕಾರ್ಯದರ್ಶಿ ಗಳಾದ ದಾಮೋದರ ಕೆ,ಕಾರ್ಯಕ್ರಮ ಸಂಯೋಜಕರಾದ ಚಿದಾನಂದ ಯು.ಎಸ್, ಗೌರವ ಸಲಹೆಗಾರರಾದ ವೀರಪ್ಪ ಗೌಡ ದೋಳ,ರಹೀಂ ಬೀಜದಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.