ಕಾಯರ್ತೋಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

0

 

ಕಾಯರ್ತೋಡಿ ಅಂಗನವಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ಧ್ವಜಾರೋಹಣವನ್ನು ನಗರ ಪಂಚಾಯತ್ ಸದಸ್ಯರಾದ ಪ್ರವಿತ ಪ್ರಶಾಂತ್ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಗುತ್ತಿಗೆದಾರರ ಸಂಘ ಸುಳ್ಯ ತಾಲೂಕು ಇದರ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಗುತ್ತಿಗೆದಾರರ ಸಂಘದಿಂದ ಅಂಗನವಾಡಿ ಮಕ್ಕಳಿಗೆ ಕೊಡುಗೆಯನ್ನು ನೀಡಿದರು ನಂತರ ಐಕ್ಯತೆಯ ಮೂಲಕ ಸಾಗಿ ಬಂದು ಅಂಗನವಾಡಿ ಕೇಂದ್ರದ ವಠಾರದಲ್ಲಿ ಸಮಾಪನಗೊಂಡಿತು ವೇದಿಕೆಯಲ್ಲಿ ನಗರ ಪಂಚಾಯತ್ ಸದಸ್ಯರಾದ ಪ್ರವಿತ ಪ್ರಶಾಂತ್ ಬಾಲ ವಿಕಾಸ ಸಮಿತಿ ಅಧ್ಯಕ್ಷರಾದ ಅರ್ಪಿತಾ ಅನಿಲ್ ಕುಮಾರ್ ಶ್ರೀನಿಧಿ ಮಹಿಳಾ ಮಂಡಲದ ಉಪಾಧ್ಯಕ್ಷರಾದ ಸೌಮ್ಯ ನವೀನ್ ಖಜಾಂಜಿ ಶೃತಿ ಮಂಜುನಾಥ ಸದಸ್ಯರಾದ ಜಯಕೃಷ್ಣ ವೇದಿಕೆಯಲ್ಲಿದ್ದರು ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿ ಸದಸ್ಯರು ಶ್ರೀನಿಧಿಯ ಮಹಿಳಾ ಮಂಡಲದ ಸದಸ್ಯರು ಗುತ್ತಿಗೆದಾರ ಸಂಘದ ಸದಸ್ಯರು ಶ್ರೀ ರಕ್ತೇಶ್ವರಿ ಸೇವಾ ಸಮಿತಿ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಪಡ್ಪು ಸ್ತ್ರೀ ಶಕ್ತಿ ಸದಸ್ಯರು ಮಿತ್ರ ಬಳಗ ಕಾಯರ್ತೋಡಿ ಸದಸ್ಯರು ತಾಯಂದಿರು ಊರ ಮಹನೀಯರು ಮಹಿಳೆಯರು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು ಕಾರ್ಯಕ್ರಮಕ್ಕೆ ಶ್ರೀನಿಧಿ ಮಹಿಳಾ ಮಂಡಲ ನಗರ ಪಂಚಾಯತ್ ಸದಸ್ಯರಾದ ಪವಿತ್ರ ಪ್ರಶಾಂತ್ ಗುತ್ತಿಗೆದರ ಸಂಘ ಸುಳ್ಯ ಶಶಿಧರ ಶೆಟ್ಟಿ ಪಡ್ಪು ಪ್ರಿಯಾ ಬಳ್ಳಡ್ಕ ಸಿಹಿ ತಿಂಡಿ ಕೊಟ್ಟು ಸಹಕರಿಸಿದರು ಲತಾ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿ ಶ್ರುತಿ ಮಂಜುನಾಥ ಸ್ವಾಗತಿಸಿ ಜಯಕೃಷ್ಣ ವಂದಿಸಿದರು.