ಎ.3 : ಯೇನೆಕಲ್ಲಿನಲ್ಲಿ “ದಿ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್” ಶುಭಾರಂಭ

0

ಕುಕ್ಕೆ ಸುಬ್ರಹ್ಮಣ್ಯ ಸನಿಹದ ಏನೇಕಲ್’ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟಲ್ ಮತ್ತು ರೆಸಾರ್ಟ್ ಉದ್ಘಾಟನೆಗೆ ಸಜ್ಜುಗೊಂಡಿದೆ.

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಸಂಸ್ಥೆಯ ಸಂಸ್ಥಾಪಕ ಹರ್ಷ ಪುಟ್ಟಪ್ಪರವರು, ” ಏಪ್ರಿಲ್ 3 ರ ಬುಧವಾರ ಬೆಳಗ್ಗೆ ರಾಜ್ಯ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ವಹಿಸುವರು.

ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಲ್ಲಾಜೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಮೂರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡಿರುವ ಹಾಗೂ ಪ್ರಕೃತಿ ತನ್ನ ಸೌಂದರ್ಯವೆಲ್ಲವನ್ನೂ ಇಲ್ಲೇ ಅನಾವರಣಗೊಳಿಸುವ ರೀತಿಯ ಲ್ಯಾಂಡ್‌ಸ್ಕೇಪ್‌ ಪರಿಕಲ್ಪನೆಯಲ್ಲಿ ಈ ಹೋಟೆಲ್ & ರೆಸಾರ್ಟ್‌ ನಿರ್ಮಾಣವಾಗಿದ್ದು,ಯಾತ್ರಿಕರ ಜತೆಗೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯದ ಊಟ, ವಸತಿ, ಮನರಂಜನೆ, ಮಕ್ಕಳಿಗೆ ಆಟವಾಡುವ ಸ್ಥಳ, ಈಜುಕೊಳ ಸಹಿತ ಎಲ್ಲಾ ಸೌಲಭ್ಯಗಳೂ ಒಂದೇ ಕಡೆ ಸಿಗಬೇಕು ಎಂಬ ಪರಿಕಲ್ಪನೆಯೊಂದಿಗೆ ಅತ್ಯುತ್ತಮವಾಗಿ ತಲೆ ಎತ್ತಿ ನಿಂತಿದೆ.

ಆಧುನಿಕ ರೆಸಾರ್ಟ್‌ಗಳಲ್ಲಿ ಇರುವಂತಹ ಲಾನ್‌ ಏರಿಯಾ, ಪ್ಯಾಂಟ್ರಿ ಹೌಸ್‌, ಬ್ಯಾಂಕ್ವೆಟ್‌ ಹಾಲ್‌, ಎಸಿ ಡೈನಿಂಗ್ ಹಾಲ್‌ ಸಹಿತ ಊಟ, ಉಪಾಹಾರ, ಪಾನೀಯ ಸೇವನೆ, ವಿಶ್ರಾಂತಿ, ವಾಕಿಂಗ್‌, ಸ್ವಿಮ್ಮಿಂಗ್‌… ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ.

ರೆಸಾರ್ಟ್‌ನಲ್ಲಿ ಒಟ್ಟು 29 ಕೊಠಡಿಗಳಿದ್ದು, ಎಸಿ ಮತ್ತು ನಾನ್ ಎಸಿ ಕೊಠಡಿಗಳಿದ್ದು, ಎಲ್ಲವೂ ವಿಶಾಲವಾಗಿವೆ, ಶುಚಿಯಾಗಿವೆ. 4 ಕಾಟೇಜ್‌ಗಳಿದ್ದು, ಮಡಿಕೇರಿಯ ಅನುಭವವನ್ನು ಈ ಕಾಟೇಜ್‌ಗಳು ಕುಕ್ಕೆಯ ಪರಿಸರದಲ್ಲಿ ನೀಡುವುದು ನಿಶ್ಚಿತ. ಬಿರು ಬೀಸಿಗೆಯಲ್ಲೂ ಕಾಡೊಳಗಿಂದ ಹರಿದು ಬರುವ ಜಲಜಲಲ ಜಲಧಾರೆ ಇಲ್ಲಿನ ಜೀವಜಲ. ಜತೆಗೆ ಕೊಳವೆಬಾವಿಯಲ್ಲೂ ನೀರು ಲಭ್ಯ ಇದೆ. 100ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಇಲ್ಲಿ ಅವಕಾಶ ಇದೆ.

ಮದುವೆ ಮಾಡಬಹುದು:
ಮದುವೆ, ಅತಿಥಿ ಸತ್ಕಾರ, ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಹಿತ ಸ್ನೇಹಿತರು, ಬಂಧುಬಳಗ ಸೇರಿಕೊಂಡು ಸಮಯ ಕಳೆಯಲು ಇಲ್ಲಿ ಸಾಕಷ್ಟು ಅವಕಾಶ ಇದೆ. ಮದುವೆಯಲ್ಲಿ ಒಂದು ಸಾವಿರ ಮಂದಿಯನ್ನು ನಿಭಾಯಿಸಬಹುದಾದಷ್ಟು ಸ್ಥಳಾವಕಾಶ ಇದ್ದು, ಅದಕ್ಕಾಗಿ ಸುಂದರ ಲಾನ್ ನಿರ್ಮಾಣವಾಗಿದೆ. ಸಣ್ಣ ಪಾರ್ಟಿಗಳಿಗೆ ಸುಮಾರು 400 ಜನರಿಗೆ ಅವಕಾಶ ಇರುವ ಪಾರ್ಟಿ ಹಾಲ್ ಸಹ ಇದೆ.

ಪುಳಿಚಾರ್ ಎಂಬ ವೆಜ್ಜೂ, ಪ್ಯಾರಡೈಸ್ ಎಂಬ ನಾನ್ ವೆಜ್:
ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಿಯರು ಇಷ್ಟಪಡುವ ನಾನಾ ಬಗೆಯ ಕರಾವಳಿ ಮತ್ತು ಇತರ ಎಲ್ಲಾ ಬಗೆಯ ಅಡುಗೆಯನ್ನೂ ಸಿದ್ಧಪಡಿಸಿ ಬಡಿಸುವ ಎರಡು ಪ್ರತ್ಯೇಕ ಹೋಟೆಲ್‌ಗಳು ಇಲ್ಲಿವೆ. ಸಸ್ಯಾಹಾರಿ ಹೋಟೆಲ್‌ಗೆ ‘ಪುಳಿಚಾರ್ ವೆಜ್‌ ರೆಸ್ಟೋರೆಂಟ್‌’ ಎಂಬ ಹೆಸರು ಇಡಲಾಗಿದ್ದರೆ, ನಾನ್‌ವೆಜ್‌ ಹೋಟೆಲ್‌ಗೆ ‘ಪ್ಯಾರಡೈಸ್ ಬಾರ್ ಆ್ಯಂಡ್ ರೆಸ್ಟೋರೆಂಟ್‌’ ಎಂಬ ಹೆಸರು ಇಡಲಾಗಿದೆ. ಎರಡಕ್ಕೂ ಪ್ರತ್ಯೇಕ ಕಿಚನ್‌ಗಳು ಇರುವುದು ವಿಶೇಷ. ಹೀಗಾಗಿ ಶುದ್ಧ ಸಸ್ಯಾಹಾರಿಗಳು ಸಹ ಇಲ್ಲಿ ಮನಸೋ ಇಚ್ಛೆ ಊಟ ಮಾಡಬಹುದು.

ಪ್ರಮುಖ ಆಕರ್ಷಣೆಗಳು

1,000 ಸಾವಿರ ಮಂದಿ ಪಾಲ್ಗೊಳ್ಳಬಹುದಾದ ಮದುವೆ ಲಾನ್‌

400 ಆಸನ ಸಾಮರ್ಥ್ಯದ ಮಿನಿ ಹಾಲ್‌

ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಪ್ರತ್ಯೇಕ ಕಿಚನ್‌

ಅತ್ಯಾಧುನಿಕ ಎಸಿ, ನಾನ್ ಎಸಿ ಸೌಲಭ್ಯದ 29 ಕೊಠಡಿಗಳು

ಹಸಿರ ಮಡಿಲಿನಲ್ಲಿ ಸುಂದರ ಕಾಟೇಜ್‌ಗಳು

100‌ಕ್ಕೂ ಅಧಿಕ ಕಾರ್ ಪಾರ್ಕಿಂಗ್ ಸೌಲಭ್ಯ

ಕುಕ್ಕೆ ಸುಬ್ರಹ್ಮಣ್ಯ ನೋಡಲು ಬರುವವರಿಗೆ ಈ ಭಾಗದಲ್ಲಿ ಒಂದೆರಡು ದಿನವನ್ನು ಆರಾಮವಾಗಿ ಕಳೆಯಲು ಅವಕಾಶ ಇರಬೇಕು. ಜತೆಗೆ ಹೊಸದಾಗಿ ಪ್ರವಾಸಕ್ಕೆ ಬರುವವರಿಗೆ ಉತ್ತಮ ಊಟ, ಉಪಚಾರದ ವ್ಯವಸ್ಥೆ ಕಲ್ಪಿಸಬೇಕು ಎಂಬ ಕಾಳಜಿಯಿಂದ ಡಿ ರಾಯಲ್ ಮೊಂಟಾನಾ ಸ್ಥಾಪಿಸಿದ್ದೇವೆ. ಈ ಭಾಗದಲ್ಲಿ ಸಹ ಅದೆಷ್ಟೋ ಬೆಳಕಿಗೆ ಬಾರದ ಪ್ರಾಚೀನ ಸ್ಥಳಗಳಿವೆ. ಕಾಡಿನ ಸಂಪತ್ತು ಇದೆ. ಜಾನಪದ ಸೊಗಡು ಇದೆ. ಅವುಗಳನ್ನು ಪ್ರವಾಸಿಗರಿಗೆ ಪರಿಚಯ ಮಾಡಿಸುವ ಉದ್ದೇಶ ಈ ರೆಸಾರ್ಟ್‌ ಸ್ಥಾಪನೆಯಿಂದ ಈಡೇರಬಹುದು ಎಂಬ ನಿರೀಕ್ಷೆ ನಮ್ಮದು.

ಹರ್ಷ ಪುಟ್ಟಪ್ಪ, ಸಂಸ್ಥಾಪಕರು ಹಾಗೂ ಮುಖ್ಯಸ್ಥರು, ಡಿ ರಾಯಲ್ ಮೊಂಟಾನಾ

======

ಯುವ ಮನಸ್ಸುಗಳು ಬೇರೆ ಏನನ್ನೋ ಬಯಸುತ್ತಿರುತ್ತವೆ. ನಮ್ಮ ಮದುವೆ ಇಂತಲ್ಲೇ ಆಗಬೇಕು. ಸುತ್ತಮುತ್ತಲಿನ ಪರಿಸರ, ಲ್ಯಾಂಡ್‌ಸ್ಕೇಪ್‌ ಹೀಗೆಯೇ ಇರಬೇಕು ಎಂದು ಆಲೋಚಿಸುತ್ತಾರೆ. ಅವರ ಇಷ್ಟಕ್ಕೆ ತಕ್ಕಂತೆ ಇಲ್ಲಿ ಮದುವೆ ಮಾಡಿಕೊಳ್ಳುವ ಸ್ಥಳ ನಿರ್ಮಾಣವಾಗಿದೆ. ಟ್ರೆಕ್ಕಿಂಗ್ ಹೋಗುವವರಿಗೆ ಇಲ್ಲಿ ಸಾಕಷ್ಟು ಅವಕಾಶ ಇದೆ. ಕುಮಾರ ಪರ್ವತದ ಜತೆಗೆ ಸುತ್ತಮುತ್ತಲಿನ ಕಾಡುಗಳಲ್ಲಿ ಸುತ್ತಾಡುವ ವಿಶಿಷ್ಟ ಅನುಭವ, ಪ್ರವಾಸಿಗರಿಗೆ ಮಜಾ ಕೊಡುವ ವಿಶ್ವಾಸ ಇದೆ

ಧನುಶ್ರೀ, ಸಿಇಒ, ಡಿ ರಾಯಲ್ ಮೊಂಟಾನಾ

ಪತ್ರಿಕಾಗೋಷ್ಠಿಯಲ್ಲಿ ದ ರಾಯಲ್ ಎಂಟರ್’ಪ್ರೈಸಸ್ ಸಮೂಹ ಸಂಸ್ಥೆಯ ನಿರ್ದೇಶಕರಾದ ಕು. ಧನುಶ್ರೀ, ಗಗನ್ ಹರ್ಷ, ವ್ಯವಸ್ಥಾಪಕ ರೂಬೆಲ್ , ರವಿಶಂಕರ್ ಬಿಟ್ಟಂಪಾಡಿ
ಉಪಸ್ಥಿತರಿದ್ದರು.