ಮೇ.11: ನಿಡ್ವಾಳ ದೇವಳದ ನೂತನಗರ್ಭಗುಡಿ ನಿರ್ಮಾಣಕ್ಕೆ ಶಿಲಾಕಲ್ಲುಆಗಮನ

0

🔸 ನಿಂತಿಕಲ್ಲಿನಿಂದ ಶ್ರೀ ದೇವಾಲಯಕ್ಕೆ ಬೃಹತ್ ವಾಹನ ಮೆರವಣಿಗೆ


🔸ಮೇ.12 ರಂದು ಪಾದುಕಾನ್ಯಾಸ

ಐವತ್ತೊಕ್ಲು ಗ್ರಾಮದ ಕರಿಕ್ಕಳ ಶ್ರೀ ಮಹಾವಿಷ್ಣು ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು
ಆ ಪ್ರಯುಕ್ತ ನೂತನ ಗರ್ಭಗುಡಿ
ನಿರ್ಮಾಣಕ್ಕೆ ಶಿಲಾಕಲ್ಲು ಆಗಮನ ಮೇ.11 ರಂದು ಮತ್ತು ಮೇ.12 ರಂದು ಪಾದುಕಾನ್ಯಾಸ ನಡೆಯಲಿದೆ.

ಮೇ.11 ರಂದು ಬೆಳಗ್ಗೆ 10.30 ರಿಂದ
ನಿಂತಿಕಲ್ಲಿನಿಂದ ನಿಡ್ವಾಳದ ವರೆಗೆ ಬೃಹತ್ ವಾಹನ ಮೆರವಣಿಗೆಯೊಂದಿಗೆ ನೂತನ ಗರ್ಭಗುಡಿಗೆ ಶಿಲಾಕಲ್ಲು ಆಗಮನ ನಡೆಯಲಿದೆ.
ಮೇ.12ರಂದು ಬೆಳಿಗ್ಗೆ 9.23 ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪಾದುಕಾನ್ಯಾಸ ನಡೆಯಲಿದೆ.
ಶ್ರೀ ದೇವಳದಲ್ಲಿ ನಡೆದ
ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಶ್ರೀ ದೇವರ ಪುನರ್ ನಿರ್ಮಾಣ ಕಾರ್ಯ ಆರಂಭ ಗೊಂಡಿದೆ.
ದೋಷಗಳ ಪರಿಹಾರ,ಶ್ರೀ ದೇವರಿಗೆ ಅನುಜ್ಞಾ ಕಲಶ, ಶ್ರೀ ದೇವರ ಬಾಲಾಲಯ ಪ್ರತಿಷ್ಠೆ, ನಾಗ ಶಿಲಾ ಪ್ರತಿಷ್ಠಾ ಕಲಶ ಮೊದಲಾದ ವೈಧಿಕ ,ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.ಶ್ರೀ ದೇವಳವು ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯಲಿದ್ದು ಭಕ್ತಾದಿಗಳ ತನು ಮನ ಧನ ಸಹಕಾರದಿಂದ
ಪೂರ್ಣ ಗೊಳ್ಳಲಿದೆ.